top of page

ವಿಮಾನ ಅಪಘಾತದ ನಂತರ ಏರ್ ಇಂಡಿಯಾ ವಿರುದ್ಧ ಕ್ರಮ; ಮೂರು ಅಧಿಕಾರಿಗಳಿಗೆ ಕೊಕ್

  • Writer: Ananthamurthy m Hegde
    Ananthamurthy m Hegde
  • Jun 21
  • 1 min read
ree

ಅಹಮದಾಬಾದ್ ವಿಮಾನ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾ ವಿರುದ್ಧ ಮೊದಲ ಪ್ರಮುಖ ಕ್ರಮ ಕೈಗೊಂಡಿದೆ. ಅಹಮದಾಬಾದ್​​ನಲ್ಲಿ ಸಂಭವಿಸಿದ ಅಪಘಾತ ಸಂಬಂಧ ಏರ್ ಇಂಡಿಯಾಕ್ಕೆ ನೀಡಿದ ಆದೇಶದಲ್ಲಿ, DGCA ನೇರವಾಗಿ ವಿಮಾನಯಾನ ಸಂಸ್ಥೆಯ ಮೂವರು ಹಿರಿಯ ಅಧಿಕಾರಿಗಳನ್ನು ಅವರ ಕೆಲಸದಿಂದ ತೆಗೆದುಹಾಕುವಂತೆ ಆದೇಶಿಸಿದೆ.

ವಿಮಾನ ಸಿಬ್ಬಂದಿಯ ವೇಳಾಪಟ್ಟಿಯಲ್ಲಿ ಗಂಭೀರ ಮತ್ತು ಪುನರಾವರ್ತಿತ ತಪ್ಪುಗಳಿಂದಾಗಿ DGCA ಈ ಕ್ರಮ ಕೈಗೊಂಡಿದೆ. ಅದಾಗ್ಯೂ, ಈ ತಪ್ಪುಗಳ ಬಗ್ಗೆ DGCAಗೆ ತಿಳಿಸಲಾಯಿತು. ಏರ್ ಇಂಡಿಯಾ ಅವರು ಇದನ್ನು ಹೇಳಿದ್ದರೂ ಸಹ, ಡಿಜಿಸಿಎ ಇದನ್ನು ವ್ಯವಸ್ಥೆಯ ಗಂಭೀರ ವೈಫಲ್ಯವೆಂದು ಪರಿಗಣಿಸಿದೆ.

ಅಹಮದಾಬಾದ್​​​ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದಲ್ಲಿದ್ದ ಪೈಲಟ್​​, ಸಿಬ್ಬಂದಿ, ಪ್ರಯಾಣಿಕರು ಸೇರಿ 242 ಮಂದಿ ಪೈಕಿ 241 ಮಂದಿ ಸಾವನಪ್ಪಿದ್ದಾರೆ. ಜೊತೆಗೆ ಹಾಸ್ಟೆಲ್​​ನ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಕೂಡ ಅಪಘಾತದಲ್ಲಿ ಸಾವು ನೋವು ಅನುಭವಿಸಿದ್ದಾರೆ. ಈ ಪ್ರಕರಣ ಸಂಬಂಧ ಇದೀಗ DGCA ಏರ್​ ಇಂಡಿಯಾ ವಿರುದ್ಧ ಮೊದಲ ಕ್ರಮ ಕೈಗೊಂಡಿದೆ. ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

Comments


Top Stories

bottom of page