top of page

ವಿಮಾನ ದುರಂತದ ಸ್ಥಳದಲ್ಲಿ ಭಗವದ್ಗೀತೆ ಸುರಕ್ಷಿತ!

  • Writer: Ananthamurthy m Hegde
    Ananthamurthy m Hegde
  • 1 day ago
  • 1 min read

ಗುರುವಾರ ಅಹಮಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171 ಅಪಘಾತದ ಸ್ಥಳದಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ಪತ್ತೆಯಾಗಿದೆ.

ತೀವ್ರವಾದ ಬೆಂಕಿಯ ಹೊರತಾಗಿಯೂ, ಈ ಪವಿತ್ರ ಪುಸ್ತಕಕ್ಕೆ ಯಾವುದೇ ಹಾನಿಯಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.

ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೂಡಲೇ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು.

ಹೊಗೆಯಾಡುತ್ತಿರುವ ಭಗ್ನಾವಶೇಷ ಸ್ಥಳದಲ್ಲಿ, ಪವಿತ್ರ ಹಿಂದೂ ಧರ್ಮಗ್ರಂಥದ ಪ್ರತಿಯನ್ನು ವಶಪಡಿಸಿಕೊಳ್ಳಲಾಗಿದೆ.

Kommentare


Top Stories

bottom of page