top of page

ಅಮಿತ್ ಷಾ ಖಂಡಿಸಿ ಅಂಬೇಡ್ಕರ್ ಸೇವಾ ಸಂಘ ಪ್ರತಿಭಟನೆ

Writer: Ananthamurthy m Hegde
Ananthamurthy m Hegde
Dec 27, 2024
1 min read

ಯಲ್ಲಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ನೀಡಿದ ಹೇಳಿಕೆ ಖಂಡಿಸಿ ಯಲ್ಲಾಪುರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಅಂಬೇಡ್ಕರ್ ಸೇವಾ ಸಂಘದಿಂದ ತಹಸೀಲ್ದಾರ ಯಲ್ಲಪ್ಪ ಗೊನ್ನೆಣ್ಣವರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್, ಪ್ರಮುಖರಾದ ಉಲ್ಲಾಸ ಶಾನಭಾಗ, ಮಾರುತಿ ಬೋವಿವಡ್ಡರ್, ಆನಿಲ ಮರಾಠೆ, ರವೀಂದ್ರ ಪಾಟಣಕರ್, ಪೂಜಾ ನೇತ್ರೇಕರ್, ಪ್ರೀತಿ ಸಿದ್ದಿ ಇತರರಿದ್ದರು.

Comments


Top Stories

1/322
bottom of page