top of page

ಕುಮಟಾದ ಸಹಾಯ ಆಯುಕ್ತೆ ಕಲ್ಯಾಣಿ ಕಂಬಳೆಗೆ ಬೀಳ್ಕೊಡುಗೆ

  • Writer: Ananthamurthy m Hegde
    Ananthamurthy m Hegde
  • Aug 8
  • 1 min read
ree

ಕುಮಟಾ: ತಾಲೂಕ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕಳೆದ 2 ವರ್ಷಗಳಿಂದ ಕುಮಟಾ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರು ವರ್ಗಾವಣೆಗೊಂಡಿರುವ

ಅವರ ಬೀಳ್ಕೊಡುಗೆ ಸಮಾರಂಭವನ್ನು ಇಂದು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕುಮಟಾ ಸಹಾಯಕ ಆಯುಕ್ತರ ಕಾರ್ಯಾಲದಿಂದ, ಅಂಕೋಲಾ ತಹಶೀಲ್ದಾರರು, ಕುಮಟಾ ಕಾರ್ಮಿಕ ಸಂಘ, ತಾಲೂಕಾ ಆಸ್ಪತ್ರೆ ಹಾಗೂ ವಿವಿಧ ಇಲಾಖೆಗಳಿಂದ ಕಲ್ಯಾಣಿ ಕಾಂಬ್ಳೆ ಅವರಿಗೆ ಹಾರ ಹಾಕಿ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕಲ್ಯಾಣಿ ಕಾಂಬ್ಳೆ ನನಗೆ ಈ ಇಲಾಖೆಯಲ್ಲಿ ಇರುವ ಎಲ್ಲಾ ನೌಕರರು ತುಂಬಾ ಸಹಕಾರ ನೀಡಿದ್ದಾರೆ. ಅಂಕೋಲಾ ವಿಮಾನ ನಿಲ್ದಾಣದ ಕಾಮಗಾರಿ, ರಾಜ್ಯ ಹೆದ್ದಾರಿ ಕಾಮಗಾರಿ, ರಾಷ್ಟಿçÃಯ ಹೆದ್ದಾರಿ ಕಾಮಗಾರಿಯ ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದ ಸಮಸ್ಯೆಗಳನ್ನೂ ಸಹ ಪರಿಹಾರ ಮಡಲಾಗಿದೆ ಎಂದರು.

ಬೈಟ್...


ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರರಾದ ಅಶೋಕ ಭಟ್, ನೂತನ ಸಹಾಯಕ ಆಯುಕ್ತರಾದ ಪಿ. ಶ್ರವಣ್ ಕುಮಾರ್, ಪ್ರಮುಖರಾದ ಆರ್.ಎಚ್. ನಾಯ್ಕ ಕಾಗಾಲ್ ಅಂಕೋಲಾ ತಹಶೀಲ್ದಾರರಾದ ಚಿಕ್ಕಪ್ಪ ನಾಯಕ್, ಗ್ರೇಡ್ 2 ತಹಶೀಲ್ದಾರರಾದ ಸತೀಶ ಗೌಡ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಸೇರಿದಂತೆ ತಹಶೀಲ್ದಾರರ ಕಾರ್ಯಲಯದ ಅಧಿಕಾರಿಗಳು, ಸಹಾಯಕ ಆಯುಕ್ತರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Comments


Top Stories

bottom of page