top of page

ಕಮಲ್​ ಹಾಸನ್​ ವಿರುದ್ಧ ಮುಂದುವರೆದ ಕನ್ನಡಿಗರ ಕಿಚ್ಚು

Writer: Ananthamurthy m Hegde
Ananthamurthy m Hegde
May 30, 2025
1 min read

ನಟ ಕಮಲ್​ ಹಾಸನ್ ವಿರುದ್ಧ ಇನ್ನೂ ಕೂಡ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್​ ಹಾಸನ್​ ಮಾತು ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಅವರನ್ನು ಈ ಕೂಡಲೇ ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ರಾಜ್ಯದ ವಿವಿಧೆಡೆ ಕಮಲ್​ ಹಾಸನ್​ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕಮಲ್ ಹಾಸನ್ ಹೇಳಿಕೆ ಖಂಡಿಸಿ, ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಮಲ್ ಹಾಸನ್ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಹೋರಾಟಗಳು ನಡೆಯುತ್ತಿವೆ. ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಕನ್ನಡಿಗರ ಕೆಂಡ ಕಾರುತ್ತಿದ್ದಾರೆ.

Comments


Top Stories

1/322
bottom of page