top of page

ಕಮಲ್​ ಹಾಸನ್​ ವಿರುದ್ಧ ಮುಂದುವರೆದ ಕನ್ನಡಿಗರ ಕಿಚ್ಚು

  • Writer: Ananthamurthy m Hegde
    Ananthamurthy m Hegde
  • May 30
  • 1 min read
ree

ನಟ ಕಮಲ್​ ಹಾಸನ್ ವಿರುದ್ಧ ಇನ್ನೂ ಕೂಡ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್​ ಹಾಸನ್​ ಮಾತು ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಅವರನ್ನು ಈ ಕೂಡಲೇ ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ರಾಜ್ಯದ ವಿವಿಧೆಡೆ ಕಮಲ್​ ಹಾಸನ್​ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕಮಲ್ ಹಾಸನ್ ಹೇಳಿಕೆ ಖಂಡಿಸಿ, ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಮಲ್ ಹಾಸನ್ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಹೋರಾಟಗಳು ನಡೆಯುತ್ತಿವೆ. ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಕನ್ನಡಿಗರ ಕೆಂಡ ಕಾರುತ್ತಿದ್ದಾರೆ.

Comments


Top Stories

bottom of page