top of page

ಸೌಮ್ಯ ಪೆರ್ನಾಜೆಗೆ "ಹವ್ಯಕ ಕೃಷಿ ರತ್ನ" ಪ್ರಶಸ್ತಿ

  • Writer: Ananthamurthy m Hegde
    Ananthamurthy m Hegde
  • Dec 31, 2024
  • 1 min read
ree

ಬೆಂಗಳೂರು ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 81 ಕೃಷಿಕರಿಗೆ "ಹವ್ಯಕ ಕೃಷಿ ರತ್ನ" ಪ್ರಶಸ್ತಿಯನ್ನು ಪ್ರಧಾನ ಮಾಡಿದರು . ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ದಿಕ್ಸೂಚಿ ಭಾಷಣವನ್ನು ನೀಡಿದರು. ಹಾಗೂ ಗೌರವಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು, ಅಧ್ಯಕ್ಷರಾದ ಅಖಿಲ ಹವ್ಯಕ ಮಹಾಸಭಾದ ಗಿರಿಧರಕಜೆ, ವೇ ಮೂ ಶೇಷಗಿರಿ ಪ್ರಧಾನ ಅರ್ಚಕರು ಸಿಗಂದೂರು, ವೆ ಮೂ ಹರಿ ನಾರಾಯಣ ಆಸ್ರಣ್ಣ, ಆಡಳಿತ ಮೊಕ್ತೇಸರರು ಕಟೀಲು, ಮುಖ್ಯಸ್ಥರು ಸಂಚಾಲಕರಾದ ಗಣೇಶ್ ಚಂದ್ರ ಮುಂತಾದ ಗಣ್ಯರು ಉಪಸ್ಥಿತ ರಿದ್ದರು. ಸೌಮ್ಯ ಪೆರ್ನಾಜೆ ಅವರಿಗೆ ಡಿ. 27 ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ನಾನು ಜೇನು ಸಾಕಾಣೆ ಜೇನು ಗಡ್ಡ

ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳಾ ಜೇನುಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹಗಳು ಕಲಾ ಪ್ರಿಯರು. ಕಲಾ ಪೋಷಕರಾಗಿ ಆಕಾಶವಾಣಿಯಲ್ಲಿ ಹಾಡುಗಳನ್ನು ಆಲಿಸುವುದು ಮತ್ತು ಹಾಡುಗಳನ್ನು ಸುಶ್ರಾವ್ಯವಾಗಿ ಗುನುಗುವುದು ಅಲ್ಲದೆ, ಸುಂದರ ಕೈಬರಹ ವೈವಿಧ್ಯಮಯ ತಿಂಡಿಗಳು ಸ್ವಾದಿಷ್ಟ ರುಚಿಕರ ಆಹಾರದ ಬರಹವು ತನ್ನ ವಿಶೇಷತೆ. ನನ್ನ ಈ ಸಾಧನೆಯನ್ನು ಗುರುತಿಸಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿ ನೀಡಿದ್ದು ಅತ್ಯಂತ ಖುಷಿ ಹಾಗೂ ಸಾರ್ಥಕ ಕ್ಷಣ ಎಂದರು .


ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ ನಂದನ್ ಕುಮಾರ್ , ಚಂದನ್ ಕುಮಾರ್ ಮಕ್ಕಳು ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನು ಗೂಡನ್ನು ನೋಡಿ ಹೇಗೆ ಬದುಕಬಹುದು ಎನ್ನುವ ಸೌಮ್ಯ ಪೆರ್ನಾಜೆ ನಮ್ಮಲ್ಲಿ ಸಹನೆ ತಾಳ್ಮೆ ಇದ್ದರೆ ಒಂದು ಅಬೂತ ಪೂರ್ವ ಕಲ್ಪನೆ ಇಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತದೆ. ಜೇನು ಕುಟುಂಬವನ್ನು ನೋಡಿ ತಿಳಿಯುವುದು ಬಹಳಷ್ಟು ಇದೆ ಎನ್ನುವ ಇವರಿಗೆ ಈಗಾಗಲೇ ಗಡಿನಾಡ ದ್ವನಿ, "ಮಧುಭೂಷಣ" ರಾಜ್ಯ ಪ್ರಶಸ್ತಿ , ಈಶ್ವರಮಂಗಲದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ, ವಿಟ್ಲ "ಸ್ವರ ಸಿಂಚನ" ಸಂಗೀತೋತ್ಸವ 2024ರಲ್ಲೂ ಗೌರವಿಸಲಾಯಿತು. ಇವರು ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯವರ ಪುತ್ರಿ. ಕೃಷಿ ಕ್ಷೇತ್ರದಲ್ಲಿನ ಶ್ರೀಮತಿಯ ಸಾಧನೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಕೃಷಿ ರತ್ನ ಎಂಬ ಪುರಸ್ಕಾರವನ್ನು ಪ್ರಧಾನ ಮಾಡಿ ಗೌರವಿಸಲಾಯಿತು.

Comments


Top Stories

bottom of page