top of page

ಕಳಪೆ ಪಡೆದು ಜೈಲು ಸೇರಿದ ಹನುಮಂತ

  • Writer: Ananthamurthy m Hegde
    Ananthamurthy m Hegde
  • Dec 27, 2024
  • 1 min read
ree

ಬಿಗ್​ಬಾಸ್ ಮನೆಯಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ಆಡಿಸಲಾಗಿದೆ. ಮನೆ ಮಂದಿಯೆಲ್ಲ ಬಹಳ ಕಷ್ಟಪಟ್ಟು ಟಾಸ್ಕ್ ಆಡಿದ್ದಾರೆ. ಬಿಗ್​ಬಾಸ್ ಅಭ್ಯರ್ಥಿಗಳನ್ನು ಎರಡು ತಂಡಗಳನ್ನಾಗಿ ಮಾಡಿತ್ತು. ಒಂದು ತಂಡಕ್ಕೆ ಭವ್ಯಹಾಗೂ ಮತ್ತೊಂದು ತಂಡಕ್ಕೆ ಚೈತ್ರಾ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿತ್ತು. ಮೊದಲು ನೋಮಿನೇಷನ್ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಬಿಗ್​ಬಾಸ್ ನೊಮಿನೇಟ್ ಮಾಡುವ ಸದಸ್ಯರ ತಲೆಯ ಮೇಲೆ ಬಾಟಲಿಯನ್ನುಹೊಡೆದು ಕಾರಣವನ್ನು ಹೇಳಲು ನೀಡಿತ್ತು . ನಂತರ ಪ್ರತಿ ವಾರದಂತೆ ಈ ವಾರವು ಕೂಡ ಉತ್ತಮ ಹಾಗೂ ಕಳಪೆ ಕೊಡುವ ಸಮಯದಲ್ಲಿ ಮನೆ ಮಂದಿಯೆಲ್ಲ ಒಕ್ಕೂರಿಲಿನಿಂದ ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ರೆಸಾರ್ಟ್ ಟಾಸ್ಕ್​ನಲ್ಲಿ ಹನುಮಂತು ಶುಚಿತ್ವ ಮೇಂಟೇನ್ ಮಾಡಲಿಲ್ಲ ಎಂದು ಅವನದ್ದೇ ತಂಡದವರು ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ಕಳಪೆಯನ್ನು ಖುಷಿಯಿಂದಲೇ ಸ್ವೀಕಾರ ಮಾಡಿದ ಹನುಮಂತು, ಇದರಿಂದ ನಾನು ಕುಗ್ಗುವುದಿಲ್ಲ ಎಂದು ಹೇಳಿ ಖುಷಿಯಿಂದಲೇ ಜೈಲು ಸೇರಿದ್ದಾರೆ.

Comments


Top Stories

bottom of page