top of page

ಬೆಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ

  • Writer: Ananthamurthy m Hegde
    Ananthamurthy m Hegde
  • Dec 4, 2024
  • 2 min read

ree

ಬೆಂಗಳೂರು: ಸೋಲದೇವನಹಳ್ಳಿ, ಯಂಟಗನಹಳ್ಳಿ ಭಾಗದಲ್ಲಿ ಅತಿ ಹೆಚ್ಚು ರೈತ ಕುಟುಂಬಗಳಿದ್ದು ಕುಮುದ್ವತಿ ನದಿಯ ವಲಯವಾಗಿದೆ. ಆದ್ದರಿಂದ ರೈತರನ್ನು ಒಕ್ಕಲೆಬ್ಬಿಸಿ 2ನೇ ವಿಮಾನ ನಿಲ್ದಾಣ ಮಾಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು ಕೂಡಲೆ ಪ್ರಸ್ತಾವನೆ ಕೈಬಿಡಬೇಕು ಎಂದು ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಹಂಚೀಪುರ ಗ್ರಾಮದ ಮಾಜಿ ಶಾಸಕರ ಗೃಹ ಕಚೇರಿಯಲ್ಲಿಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾಜಿ ಆವರು ಮಾತನಾಡಿದರು.

ಈಗಾಗಲೇ ನೆಲಮಂಗಲದ ಸೋಂಪುರ, ತ್ಯಾಮಗೊಂಡ್ಲು ಹೋಬಳಿಯಲ್ಲಿ ಕೈಗಾರಿಕೆಗಳಿಗೆ ಭೂಸ್ವಾಧೀನವಾಗಿ ರೈತರು ಜಮೀನು ಕಳೆದುಕೊಂಡಿದ್ದಾರೆ. ಈಗ ಕಸಬಾ ಹೋಬಳಿಯ 2 ಪಂಚಾಯಿತಿಯಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆ ಇರುವುದು ಬಹಳಷ್ಟು ರೈತರಿಗೆ ಅನ್ಯಾಯವಾಗಲಿದೆ. ಕುಮುದ್ವತಿ ಭಾಗದಲ್ಲಿಕೃಷಿ ಭೂಮಿ, ಪಶುಸಂಗೋಪನೆ ನಂಬಿರುವ 2 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿದ್ದು 13 ದೊಡ್ಡ ಗ್ರಾಮ, 22 ಸಣ್ಣ ಗ್ರಾಮಗಳಿವೆ. ಹಿರಿಯ ನಟಿ ಲೀಲಾವತಿ ಅವರ ಸ್ಮಾರಕ ಕೂಡ ಆ ಭಾಗದಲ್ಲಿಯೇ ಇದ್ದು ಬಹಳಷ್ಟು ಜನರಿಗೆ ಅನ್ಯಾಯವಾಗುವುದರಿಂದ ಈ ಭಾಗದಲ್ಲಿ ವಿಮಾನ ನಿಲ್ದಾಣವಾಗಬಾರದು. ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಸರ್ಕಾರದಲ್ಲಿಒತ್ತಾಯ ಮಾಡುತ್ತೇನೆ ಎಂದರು.

2011 - 12 ರಲ್ಲಿ ಆಂಜನಮೂರ್ತಿ ಅವರು ಈಗಿನ ನಗರದ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಿರುವುದು, ನಾನು 2018ರಲ್ಲಿ ಎಚ್‌ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಒಕ್ಕಲಿಗರ ಭವನ ಹಾಗೂ ಡಾ ಬಿ ಆರ್‌ ಅಂಬೇಡ್ಕರ್‌ ಭವನಕ್ಕೆ 10ಕೋಟಿ ರೂ. ಅನುದಾನ ನೀಡಿರುವ ಆದೇಶ ತೋರಿಸುತ್ತೇನೆ. ಜಾಗ ಸಿಗದ ಕಾರಣ ನಿರ್ಮಾಣ ಮಾಡಲು ಸಾಧ್ಯವಾಗದೆ ಹಣ ವಾಪಸು ಹೋಗಿದೆ. ನಮ್ಮಲ್ಲಿ 40 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಸಮುದಾಯದ ಜನರಿದ್ದಾರೆ. ನಾನು ಕಳಪೆ ಕಾಮಗಾರಿ ಮಾಡಿಲ್ಲ ಶಾಸಕರು ಮಾತು ವಾಪಸ್‌ ಪಡೆಯಬೇಕು ಎಂದರು.

ಆಕಸ್ಮಿಕವಾಗಿ ಅಧಿಕಾರವನ್ನು ಜನ ನೀಡಿದ್ದಾರೆ. ನೆಲಮಂಗಲ ಜನತೆ ಬಗ್ಗೆ ಇನ್ನೂ ಗೊತ್ತಿಲ್ಲ. ಬಹಳಷ್ಟು ಬುದ್ದಿವಂತರು, ಜ್ಞಾನ, ವಿದ್ಯಾವಂತರಿದ್ದಾರೆ. ಆಗಾಗಿ ಈ ಕ್ಷೇತ್ರವನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಜೆಡಿಎಸ್‌ನವರು ಕಾಂಗ್ರೆಸ್‌ ಸೇರಿಬಿಟ್ಟರು ಎಂದು ಹೇಳುತ್ತಿದ್ದಾರೆ. ಆದರೆ ಸೇರ್ಪಡೆಯಾದವರ ದೇಹ ಅಲ್ಲಿಇದ್ದರೂ ಮನಸ್ಸು ಇಲ್ಲಿಯೇ ಇರುತ್ತದೆ. ಮುಂದೆ ನಮಗೆ ಸಹಕಾರ ನೀಡುತ್ತಾರೆ ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, " ನಮ್ಮ ಭಾಗದಲ್ಲಿ ಏರ್‌ಪೋರ್ಟ್‌ ಆಗುವುದು ಒಳ್ಳೆಯದಲ್ಲ. ನಾವು ವಿರೋಧ ಮಾಡುತ್ತೇವೆ. ನಮ್ಮ ಪಕ್ಷದಿಂದ ಬೇರೆ ಕಡೆ ಹೋಗುವವರು ಹೋಗಲಿ. ಅವರು ನಮ್ಮ ಪಕ್ಷದಲ್ಲಿಗೆದ್ದು ಸೇವೆ ಮಾಡದೆ ಅನ್ಯಪಕ್ಷಕ್ಕೆ ಹೋಗಿ ಪಕ್ಷ ದ್ರೋಹ ಮಾಡುವುದು ತಂದೆ ತಾಯಿಯನ್ನು ಕೊಲೆ ಮಾಡಿದಂತೆ ಇಂತಹ ದ್ರೋಹ ಮಾಡಬೇಡಿ. ಅಧಿಕಾರ ಬೇಕಾ ರಾಜೀನಾಮೆ ನೀಡಿ ಹೋಗಿ, ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡುವ ಹಕ್ಕಿಲ್ಲ " ಎಂದು ಕೈ ಸೇರಿದ ಸದಸ್ಯರಿಗೆ ಟಾಂಗ್‌ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಸುನೀಲ್‌ ಮೂಡ್‌, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌದರಿ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌, ನಗರಸಭೆ ಸದಸ್ಯ ಕೃಪಾನಂದ್‌, ಮುಖಂಡರಾದ ಮಧು, ರಮೇಶ್‌, ಕೃಷ್ಣ, ಮುನಿರಾಜು, ರಾಜಣ್ಣ, ಕಾಂತರಾಜು, ಬೂದಿಹಾಳ್‌ರಾಜಣ್ಣ, ಛಲವಾದಿ ನಾಗೇಂದ್ರ, ಮಲ್ಲರಬಾಣವಾಡಿ ರುದ್ರೇಶ್‌, ಮಧುಸೂಧನ್‌, ರಘುವರ್ಮ,ದೇಗನಹಳ್ಳಿ ಸುರೇಶ್‌, ನಾಗರಾಜು, ಆರ್‌ವಿ.ರಾಜಣ್ಣ, ಕನಕರಾಜು, ರವಿ ಮತ್ತಿತರರಿದ್ದರು.

ರೈತ ಕುಟುಂಬಗಳು ವಾಸಿಸುವ ಜಾಗದಲ್ಲಿ ಭೂ ಮಾಫಿಯಾದವರ ಕಣ್ಣು ಬಿದ್ದು ವಿಮಾನ ನಿಲ್ದಾಣ ಪ್ರಸ್ತಾವನೆಯಾಗಿದ್ದು, ಈ ಬೆಳವಣಿಕೆ ರೈತರಿಗೆ ಸಂಕಷ್ಟ ತರಲಿದೆ. ಸರ್ಕಾರ ಮನ್ನಣೆ ನೀಡದೆ ಪ್ರಸ್ತಾವನೆ ಕೈಬಿಡಬೇಕು ಎಂದು ಹಂಚೀಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಭವಾನಿ ಶಂಕರ್‌ ಬೈರೇಗೌಡ್ರು ಒತ್ತಾಯಿಸಿದರು.

Comments


Top Stories

bottom of page