top of page

ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಜನತೆಗೆ ಎಚ್ಡಿಕೆ ವಿಶ್ವಾಸ

  • Writer: Ananthamurthy m Hegde
    Ananthamurthy m Hegde
  • Feb 2
  • 1 min read

ಹಾಸನ : ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವಿಚಾರವಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ree

ನಮ್ಮ ಪಕ್ಷದಲ್ಲಿ ಏನಾಗಿದೆ? ಅವರನ್ನು ಹದಿನೈದು ವರ್ಷದಿಂದ ನೋಡಿದ್ದೇನೆ. ಅದಕ್ಕೆ ತಲೆ ಏಕೆ ಕೆಡಿಸಿಕೊಳ್ಳೋಣ? ಅವರು ಹೊಗೊಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು? ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಅವರಿಗೆ ವೈಯುಕ್ತಿಕವಾದ ಸಮಸ್ಯೆಗಳಿರಬಹುದು. ಅದು ಪಕ್ಷದ ಸಮಸ್ಯೆ ಅಲ್ಲ. ಅವರ ವೈಯಕ್ತಿಕ ಸಮಸ್ಯೆ, ಪರ್ಸನಲ್ ಅಜೆಂಡಾಗಳಿರಬಹುದು. ನಮ್ಮಲ್ಲಿ ಯಾವುದೇ ಗೊಂದಲ, ಗುಂಪುಗಾರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಬಣ ರಾಜಕೀಯ ವಿಚಾರ

ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ಕೊಡುವುದು ತಪ್ಪಾಗುತ್ತದೆ. ಬಿಜೆಪಿ ಹೈಕಮಾಂಡ್ ಇದೆ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದರು. ಸಿಎಂ ಬದಲಾವಣೆ ವಿಚಾರವಾಗಿ, ಅದು ನನಗೆ ಸಂಬಂಧ ಇಲ್ಲ, ಕಾಂಗ್ರೆಸ್‌ನವರು ತೀರ್ಮಾನ ಮಾಡಿಕೊಳ್ಳಬೇಕು ಎಂದರು.

ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನರ ನಿರೀಕ್ಷೆ ವಿಚಾರ

ಬಜೆಟ್‌ನಲ್ಲಿ ಬರದೇ ಇರಬಹುದು. ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನಪಡುತ್ತಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇವತ್ತು ಅಲ್ಲಿ ಏನೇನು ನಡೆದಿದೆ, ಯಾರ್ಯಾರು ಸೇರಿಕೊಂಡು ಭೂಮಿ ಲಪಟಾಯಿಸಿ ಬಡಾವಣೆ ರಚನೆ ಮಾಡುತ್ತಿದ್ದಾರೆ ಎಲ್ಲವೂ ನಮಗೆ ಗೊತ್ತಿದೆ ಎಂದರು.

ವಿಮಾನ ನಿಲ್ದಾಣ ದೇವೇಗೌಡರ ಕನಸು

ವಿಮಾನ ನಿಲ್ದಾಣ ಮಾಡಬೇಕೆನ್ನುವುದು ದೇವೇಗೌಡರ ಕನಸು. ಜನರು ಓಡಾಡಲು ವಿಮಾನ ನಿಲ್ದಾಣ ಮಾಡುತ್ತಿಲ್ಲ. ರೈತರು ಬೆಳೆದಂತಹ ಬೆಳೆಗೆ ಒಂದು ಹೊಸ ಪದ್ದತಿಯಲ್ಲಿ ವಿದೇಶಗಳಿಗೆ ಏರ್‌ ಕಾರ್ಗೋದಲ್ಲಿ ಎಕ್ಸ್‌ಪರ್ಟ್ ಮಾಡಿ ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಬೇಕೆಂದು ದೇವೇಗೌಡರ ಕನಸಿದೆ. ಇಪ್ಪತ್ತೈದು ವರ್ಷದಿಂದ ದೇವೇಗೌಡರಿಗೆ ಅದೇ ಚಿಂತೆ. ಅದಕ್ಕೆ ಇವರು ಎಷ್ಟರಮಟ್ಟಿಗೆ ಬೆಂಬಲ ಕೊಡ್ತಾ ಇದ್ದಾರೆ ಎಂದು ಎಲ್ಲರ ಕಣ್ಣೆದುರೇ ಇದೆ ಎಂದರು.

ಹಾಸನದಲ್ಲಿ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂಬ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ವಿಚಾರವಾಗಿ, ರಾಜ್ಯದಲ್ಲೇ ಅವರು ಹೋರಾಟ ಮಾಡಬೇಕು ಅನ್ನೋದು ಇದೆ. ನನಗೆ ಹೆಚ್ಚಿನ ಜವಾಬ್ದಾರಿಯನ್ನು ಪ್ರಧಾನಮಂತ್ರಿಗಳು ಕೊಟ್ಟಿದ್ದಾರೆ. ಪಕ್ಷ ಸಂಘಟನೆಗೆ ವಯಸ್ಸಿನ ಸಮಸ್ಯೆ ಇದ್ದರೂ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಹೋರಾಟ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ನನಗೆ ಬೇರೆ ಬೇರೆ ರೀತಿಯ ಒತ್ತಡಗಳಿದೆ ಎಂದು ತೀರ್ಮಾನಿಸಿದ್ದಾರೆ. ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ನಮ್ಮ ಮುಂದೆ ಅವರು ಇನ್ನು ಇರಬೇಕು. ಈ ರಾಜ್ಯದ ಬಗ್ಗೆ ಅವರ ಕನಸುಗಳಿದ್ದವು, ಅದನ್ನು ನನಸು ಮಾಡುವ ಒಂದು ಕಾಲವನ್ನು ಈ ನಾಡಿನ ಜನ ಕೊಡ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ಅದರನ್ನು ಅವರು ಕಣ್ಣಾರೆ ನೋಡಬೇಕು. ಈ ರಾಜ್ಯದ ಅಭಿವೃದ್ದಿಗೆ ಅವರು ಮಾಡಲು ಆಗದೇ ಇದ್ದದ್ದನ್ನು, ನಾನು ಮಾಡಲು ನನ್ನದೇ ಆದ ಕಲ್ಪನೆ ಇಟ್ಟುಕೊಂಡಿದ್ದೇವೆ. ಅವರು ಕೊಟ್ಟಿರುವ ಮಾರ್ಗದರ್ಶನವನ್ನು ಇಟ್ಟುಕೊಂಡಿದ್ದೇವೆ. ಆ ಕಾರ್ಯಕ್ರಮಗಳನ್ನು ತರಲು ಯೋಜನೆ ಇಟ್ಟುಕೊಂಡಿದ್ದೇನೆ ಎಂದರು.

Comments


Top Stories

bottom of page